ಸತ್ತ ನೆನಪುಗಳ ಸುತ್ತ ಹರವಿ
ಕುಳಿತು ಕಣ್ಣೀರಿಟ್ಟರೆ ಮರುಕಳಿಸೀತೆ
ಕಳೆದ ಕಾಲ........?
ಒಣಗಿದ ಆಸೆಗಳಲಿ ಮನವಿಟ್ಟು
ಮುದುಡಿದರೆ ಅರಳೀತೆ ಮತ್ತೆ
ನವ ಚೈತ್ರ ಕಾಲ.........?
ಒಮ್ಮೆ ಮರೆತುಬಿಡು ಮನವೆ
ಅನುಭವಿಸಿದ್ದನ್ನೆಲ್ಲ ,
ಒಮ್ಮೆ ಕಲಿತುಬಿಡು ಮನವೆ
ಅನುಭವಿಸುವುದನ್ನೆಲ್ಲ...!
ನೀನಿನ್ನೂ ಸವಿಯಬೇಕಿದೆ
ಈ ಬಾಳಿನ ಸೊಗಸು.
ಯಾರು ಬಲ್ಲರು ಬದುಕ...?
ತಡೆ ಮನವೆ ಜನಿಸೀತು ಮತ್ತೊಂದು ಕನಸು....... !!!!
ಶುಕ್ರವಾರ, ಡಿಸೆಂಬರ್ 18, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
nice posts ... keep posting
ಪ್ರತ್ಯುತ್ತರಅಳಿಸಿ